ಉತ್ತರ ಭಾರತದಾದ್ಯಂತ ಭಾರೀ ಮಳೆಯಿಂದಾಗ ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಭಾಗಗಳು ಜಲಾವೃತವಾಗಿದೆ. ಮನೆಮಠಗಳು ಜಲಾವೃತವಾಗಿದ್ದು ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಸಂತ್ರಸ್ಥರ ನೆರವಿಗೆ ನಿಲ್ಲಬೇಕು ಎಂದು ಟ್ಟಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ
असम, बिहार और यूपी के कई क्षेत्रों में आई बाढ़ से जनजीवन अस्त व्यस्त है। लाखों लोगों पर संकट के बादल छाए हुए हैं।
बाढ़ से प्रभावित लोगों की मदद के लिए हम तत्पर हैं। मैं कांग्रेस कार्यकर्ताओं व नेताओं से अपील करती हूं कि प्रभावित लोगों की मदद करने का हर संभव प्रयास करें। pic.twitter.com/RiOMe5R0D3
— Priyanka Gandhi Vadra (@priyankagandhi) July 20, 2020
ಈ ಬಗ್ಗೆ ಎರಡು ಪೋಟೋಗಳನ್ನು ಪ್ರಕಟಿಸಿರುವ ಪ್ರಿಯಾಂಕ ಗಾಂಧಿ ಇದೀಗ ಟ್ರೋಲ್ಗೆ ಒಳಗಾಗಿದ್ದಾರೆ. ಎಲ್ಲಿಯೋ ನಡೆದಿರುವ ಪ್ರವಾಹದ ಪೋಟೋಗಳನ್ನು ಬಿಹಾರ, ಅಸ್ಸಾಂ ಹಾಗೂ ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳ ಚಿತ್ರಣ ಎಂದಿರುವ ಅವರು, ತಾವು ಇದಕ್ಕೆ ಸಹಾಯ ಮಾಡುವುದಾಗಿ ಬರೆದುಕೊಂಡಿದ್ದಾರೆ.
ಈ ಪೋಟೋಗಳು ನಕಲಿ ಎಂದು ತಿಳಿಯುತ್ತಿದ್ದಂತೆ ಟ್ರೋಲಿಗರು ಪ್ರಿಯಾಂಕಾ ಕಾಲೆಳೆಯಲು ಶುರು ಮಾಡಿದ್ದಾರೆ. ಸಹಾಯಹಸ್ತ ಚಾಚುವುದಾಗಿ ಹೇಳುತ್ತಿರುವ ಪ್ರಿಯಾಂಕಾ ಅವರು, ಯಾವ ಪ್ರವಾಹಪೀಡಿತರಿಗೆ ನೆರವಾಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Watch Video
The images you’ve used is from 2017 and 2019.
This is what happens when you show Fake Sympathy on Twitter instead of actually helping people. pic.twitter.com/30kKWJqa0C
— Ankur Singh (@iAnkurSingh) July 20, 2020