ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್-ಡೌನ್ ಜಾರಿಯಾಗಿರುವುದರಿಂದ ದಿನಗೂಲಿ ನೌಕರರು, ಬಡವರು ತುಂಬಾ ಸಂಕಷ್ಟದಲ್ಲಿದ್ದಾರೆ. ಇವರ ನೆರವಿಗೆ ಹಲವು ಸಂಘಸಂಸ್ಥೆಗಳು, ದಾನಿಗಳು ಮುಂದೆ ಬಂದಿದ್ದಾರೆ. ಇದರಲ್ಲಿ ಹಲವರು ಯಾವುದೇ ಪ್ರಚಾರದ ಆಸೆಯಿಲ್ಲದೆ ದಾನ ಮಾಡುತ್ತಿದ್ದಾರೆ.
ಆದರೆ ಇನ್ನು ಕೆಲವರು ತಾವು ಮಾಡೋ ದಾನದ ಪೋಟೋ, ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದು ದಾನ ಪಡೆದವರಿಗೆ ಮುಜುಗರ ಉಂಟು ಮಾಡುತ್ತೆ. ಹೀಗೆ ಪೋಟೋ ತೆಗೆದು ವೈರಲ್ ಮಾಡುತ್ತಾರೆ ಎಂಬ ಕಾರಣದಿಂದಲೇ ಅದೆಷ್ಟೋ ಜನ ಸಹಾಯದ ಅಗತ್ಯ ಇದ್ದರು ಸಹಾಯ ಪಡೆಯಲು ಮುಂದೆ ಬರಲ್ಲ.
ಇದನ್ನೆಲ್ಲ ಮನಗಂಡ ಯುವಕನೊಬ್ಬ ಇದೀಗ ದಾನ ಮಾಡೋವಾಗ ದಯವಿಟ್ಟು ನಿಮ್ಮ ಕ್ಯಾಮರಾವನ್ನು ಕಿಸೆಯಲ್ಲಿಡಿ ಎಂದು ಕೇಳಿಕೊಂಡಿದ್ದಾನೆ.